ಸಿನಿಮಾ

ಚಂದನವನದ ಹಿರಿಯ ಕಲಾವಿದ ಶಂಕರ್ ರಾವ್ ವಿಧಿವಶ

ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶಂಕರ್ ರಾವ್(84) ರವರು ನಿಧನರಾಗಿದ್ದಾರೆ. ಅವರು ಕೆಲವುದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಶಂಕರ್ ರಾವ್ ಮೂಲತ: ತುಮಕೂರಿನವರು. ಬಾಲ್ಯದಲ್ಲಿ ನಟನೆಯಲ್ಲಿ ಆಸಕ್ತಿ ಹೊಂದಿದ್ದ ಶಂಕರ್‍ರಾವ್ ಸಿನಿಮಾಗಳನ್ನು ನೋಡುತ್ತಾ ಸಿನಿಮಾ ಕ್ಷೇತ್ರದ ಮೇಲೆ ಆಸಕ್ತಿ ಬೆಳೆಸಿಕೊಂಡರು.

ಮೊದ ಮೊದಲು ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಇವರು ತಮ್ಮ ಕಲಾ ಪ್ರತಿಭೆಯ ಮೂಲಕ ಬೆಳ್ಳಿತೆರೆಗೆ ಪಾದರ್ಪಣೆ ಮಾಡಿದರು. ಇವರ ಮೊದಲ ಚಿತ್ರ ಯಾರ ಸಾಕ್ಷಿ. ನಂತರ ಇವರಿಗೆ ಸಾಲು ಸಾಲು ಚಿತ್ರಗಳಲ್ಲಿ ಅವಕಾಶ ಸಿಕ್ಕವು. ಗಂಭೀರ ಮತ್ತು ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಶಂಕರ್ ರಾವ್ ಪಾಪಪಾಂಡು ಧಾರವಾಹಿಯ ಮೂಲಕ ಮನೆಮಾತಾಗಿದ್ದರು. ಬಿಸಿಬಿಸಿ, ಧ್ರುವ, ಅಪ್ಪು ಚಿತ್ರಗಳಲ್ಲಿನ ಅಭಿನಯಗಳಲಿ ಮನೋಜ್ಞವಾಗಿ ನಟಿಸಿದ್ದರು.

ಇವರ ನಿಧನಕ್ಕೆ ಚಲನಚಿತ್ರದ ಕಲಾವಿದರು, ರಂಗಭೂಮಿ ಕಲಾವಿದರು ಸಂತಾಪ ಸೂಚಿದ್ದಾರೆ.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!