ರೋಟರಿ ಸಿಲ್ಕ್ ಸಿಟಿ ರಾಮನಗರ ಪದವಿಸ್ವೀಕಾರ ಸಮಾರಂಭ ಇತ್ತಿಚೇಗೆ ನಗರದ ಆರ್.ವಿ.ಸಿ.ಎಸ್. ಕನ್ವೆನ್ಷನ್ ಹಾಲ್ ನಲ್ಲಿ ನಡೆಯಿತು. ಸಮಾರಂಭದಲ್ಲಿ ಪಿಡಿಜಿ ಪ್ಲೈಟ್ ಲೇ. ರೋ. ಕೆ.ಪಿ. ನಾಗೇಶ್ರವರು ಅನುಸ್ಥಾಪನಾಧಿಕಾರಿಯಾಗಿ ಭಾಗವಹಿಸಿ ರೋ. ಶಿವರಾಜ್ ಆರ್ ರವರಿಗೆ ಸಿಲ್ಕ್ ಸಿಟಿ 2022-23ನೇ ಸಾಲಿನ ಅಧ್ಯಕ್ಷರಾಗಿ ಹಿಂದಿನ ಅಧ್ಯಕ್ಷರಾದ ರೋ. ಸೋಮಶೇಖರ್ ರಾವ್ ರವರಿಂದ ಪದವಿ ಹಸ್ತಾಂತರ ಮಾಡಿದರು. ಕಾರ್ಯದರ್ಶಿಯಾಗಿ ರೋ. ಇಶಾಂತ್ ಎಸ್.ಬಿ. ಮತ್ತು ಇತರೇ 30 ಜನ ಆಡಳಿತ ಮಂಡಳಿ ಮತ್ತು ಸಮಿತಿ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು.
ರೋ. ಕೆ.ಪಿ. ನಾಗೇಶ್ರವರು ಮಾತನಾಡಿ ಸಿಲ್ಕ್ ಸಿಟಿ ಪ್ರಾರಂಭವಾದಗಿನಿಂದಲೂ ಉತ್ತಮವಾದ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಹಲವಾರು ಪ್ರಶಸ್ತಿಗಳನ್ನು ಪಡೆದಿರುವುದು ಹೆಮ್ಮೆ ತಂದಿದೆ ಎಂದರು. ಮುಂದಿನ ದಿನಗಳಲ್ಲಿ ಸಂಸ್ಥೆ ಸ್ವಂತ ಕಟ್ಟಡವನ್ನು ಹೊಂದಲಿ ಎಂದು ಆಶಯ ವ್ಯಕ್ತಪಡಿಸಿದರು.
ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಶ್ರೀ ಶಿವರಾಜು ಮತ್ತು ಸಾರ್ವಜನಿಕ ಕ್ಷೇತ್ರದಿಂದ ಸುರೇಶ್ಬಾಬು ಇವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕಪಡೆದ ಸರ್ಕಾರಿ ಕಾಲೇಜಿನ 6 ಮಕ್ಕಳಿಗೆ ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ಹಾಗೂ ಚಿಗುರು ಫೌಂಡೇಷನ್(ರಿ) ಮತ್ತು ರೋಟರಿ ಸಿಲ್ಕ್ ಸಿಟಿ ಸಹಯೋಗದಲ್ಲಿ ನಡೆದಿದ್ದ ಮಕ್ಕಳ ಕೃಷ್ಣವೇಷ ಅಲಂಕಾರ ಛಾಯಚಿತ್ರ ಸ್ಪರ್ಧೆಯಲ್ಲಿ ಆಕರ್ಷಕ ಬಹುಮಾನಕ್ಕೆ ಆಯ್ಕೆಗೊಂಡಿದ್ದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಸಿಲ್ಕ್ ಸಿಟಿಯ ಹೆಮ್ಮೆಯ ಪತ್ರಿಕೆ ರೇಷ್ಮೆನಾಡನ್ನು ಬಿಡುಗಡೆಗೊಳಿಸಲಾಯಿತು. ರೋಟರಿ ಸಿಲ್ಕ್ ಕುಟುಂಬಕ್ಕೆ 7 ಜನ ನೂತನ ಸದಸ್ಯರು ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ವಲಯ ಪಾಲಕರಾದ ರೋ ಎಲ್. ಸಿದ್ದಪ್ಪಾಜಿ ಮತ್ತು ಅಸಿಸ್ಟೆಂಟ್ ಗರ್ವನರ್ ಆದ ರೋ ಭರತ್, 2021-22ನೇ ಸಾಲಿನ ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷರಾದ ರೋ. ಸೋಮಶೇಖರ್ ರಾವ್ ಮತ್ತು ಕಾರ್ಯದರ್ಶಿ ರೋ. ಶೇಖರ್ ಉಪಸ್ಥಿತರಿದ್ದರು. ಪಾಸ್ಟ್ ಪ್ರೇಸಿಡೆಂಟ್ಗಳಾದ ರೋ. ವಿ. ಗೋಪಾಲ್ , ರೋ. ಎಲ್. ಪ್ರಭಾಕರ್, ರೋ. ರವಿಕುಮಾರ್ ಹಾಗೂ ಸಿಲ್ಕ್ ಸಿಟಿ ಸದಸ್ಯರು ಮತ್ತು ಕುಟುಂಬದವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ರೋ. ಜೆ.ನವೀನ್ ಕುಮಾರ್ ನಿರೂಪಣೆ ಮಾಡಿದರು.